Monday, October 11, 2010

ಆರ್ಟಿಐ ಸುಳಿವು
ಅಕ್ರಮದ 'ಅರಿವು'

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಂದಿಗೆ (ಅ.12) ಐದು ವರ್ಷ. ಐದು ವರ್ಷಗಳಲ್ಲಿ  ಆರ್ಟಿಐ ಕಾಯ್ದೆ ಅದೆಷ್ಟು ಸಮರ್ಪಕವಾಗಿ ಬಳಕೆಯಾಗಿದೆ ಎನ್ನುವ ಬಗ್ಗೆ ದೇಶದಲ್ಲಿ ಜಿಜ್ಞಾಸೆ ನಡೆಯುತ್ತಿದೆ. ಹಲವೆಡೆ ಅಧಿಕಾರಿಶಾಹಿಗಳು ಈ ಹಕ್ಕನ್ನು ದಮನ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಆರ್ಟಿಐ ಕಾರ್ಯಕರ್ತರ ಕೊಲೆಗೂ ಇಳಿದ ಪ್ರಕರಣಗಳು ನಡೆದಿವೆ. ಆರ್ಟಿಐ ಕಾಯ್ದೆಯನ್ನು ಬಳಸಿಕೊಂಡು ಜನಸಾಮಾನ್ಯರೊಬ್ಬರು ಎಂಥ ಬದಲಾವಣೆ ತರಬಹುದು ಎನ್ನಲು ಇಲ್ಲಿದೆ ನೋಡಿ ಒಂದು ಉದಾಹರಣೆ. ಇಂಥ ಬದಲಾವಣೆ ಎಲ್ಲೆಡೆ ನಡೆದರೆ? 

  •  ವೆಂಕಟರಾಯಪ್ಪ ಕಳೆದ ವರ್ಷ ತೀರಿಕೊಂಡಿದ್ದಾರೆ. ಆದರೆ ಮೊನ್ನೆ ಮೊನ್ನೆ ಅವರ ಹೆಸರಲ್ಲಿ ಇನ್ನಾರೋ ಸಣ್ಣ ರೈತರಿಗೆ ಸರಕಾರ ನೀಡುವ ಸಹಾಯಧನ ಪಡೆದಿದ್ದು ಬಹಿರಂಗವಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಭಾರಿ ಗದ್ದಲವಾಗಿದೆ.
  •   ಹೈಸ್ಕೂಲ್ ಮಕ್ಕಳೆಲ್ಲ ತಮಗೆ ಸ್ಕಾಲರ್ಶಿಪ್ ಬಂದಿದೆಯೇ ಎಂದು ಹೆಸರನ್ನು ಹುಡುಕುತ್ತಿದ್ದಾರೆ. ಎಷ್ಟೋ ಸಲ, ಸ್ಕಾಲರ್ಶಿಪ್ ಮಂಜೂರಾಗಿದ್ದರೂ ಅವರ ಕೈಗೆ ಸೇರಿರುವುದೇ ಇಲ್ಲ.  ಇನ್ನಾರೋ ಗುಳುಂ ಮಾಡಿರುತ್ತಾರೆ. ಈಗ ಸ್ಕಾಲರ್ಶಿಪ್ ಮಂಜೂರಾದ ವಿದ್ಯಾರ್ಥಿಗಳ ಪಟ್ಟಿಯೇ ಪ್ರಕಟವಾಗುತ್ತದೆ!
 ಇದೆಲ್ಲವೂ ಚಿಂತಾಮಣಿಯ ಜಿ.ವಿ. ಮಂಜುನಾಥ್ ಕರಾಮತ್ತು. ಆ ತಾಲ್ಲೂಕಿನಲ್ಲಿ ಅಕ್ರಮ ಬಹಿರಂಗ ಮಾಡಲು ಅವರೇನು ಒಂದು ದಿನದ ಮುದಲ್ವನ್' ಆಗಿಲ್ಲ.  ಮಾಹಿತಿ ಹಕ್ಕು ಕಾಯ್ದೆ ಮೂಲಕ ಎಲ್ಲವನ್ನೂ ಬಹಿರಂಗಪಡಿಸುತ್ತಿದ್ದಾರೆ. ಅದೂ ಒಂದು ಪತ್ರಿಕೆಯ ಮೂಲಕ.
ಭ್ರಷ್ಟತೆ ಕಂಡಾಗ ಸಿಡಿದೆದ್ದು  ಪ್ರತಿಭಟನೆ ಮಾಡಿಕೊಂಡಿದ್ದ ಮಂಜುನಾಥ್ ಎದುರಿಸಿದ ಆಪತ್ತು ಒಂದೆರಡಲ್ಲ. ಸಮಾನಮನಸ್ಕರನ್ನು ಒಗ್ಗೂಡಿಸಿಕೊಂಡು ವೇದಿಕೆ ರೂಪಿಸಿಯೂ ಹೋರಾಡಿದರು. ಅಲ್ಲೂ ಬೆದರಿಕೆ ಕರೆ, ಕ್ಷಣಕ್ಷಣಕ್ಕೆ ಅಪಾಯ...
ಕೊನೆಗೆ ಅವರು ರೂಪಿಸಿದ ಹೋರಾಟದ ಹೊಸ ಹಾದಿ ಫಲ ಕೊಟ್ಟಿತು.
`ಅರಿವು' ಎಂಬ ದ್ವೈಮಾಸಿಕ ಪತ್ರಿಕೆ ಆರಂಭಿಸಿದರು. ಚಿಂತಾಮಣಿ ತಾಲ್ಲೂಕಿಗೆ ಸೀಮಿತವಾದ ಈ ಪತ್ರಿಕೆಯಲ್ಲಿ ಸುದ್ದಿಗಳಿರುವುದಿಲ್ಲ, ಜಸ್ಟ್ ಮಾಹಿತಿಗಳು. ಮಾಹಿತಿ ಹಕ್ಕು ಕಾಯ್ದೆಯಡಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ  ಕಾರ್ಯಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆದುಕೊಳ್ಳುವ ಮಂಜುನಾಥ್ ಅದನ್ನು  ಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಿದರು. ಇದರಿಂದ ತಾಲ್ಲೂಕಿನಲ್ಲಿ ನಡೆಯುವ ಹಲವು ಅಕ್ರಮಗಳು ಕಚೇರಿಯ ನಾಲ್ಕು ಗೋಡೆಯಿಂದ ಹೊರಗೆ ದಾಟಿ ಬಂದಿವೆ.
ಎರಡು ತಿಂಗಳಿಗೊಮ್ಮೆ ಹೊರಬರುವ ಈ ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೊಂದು ಸುದ್ದಿಯೂ ರೋಚಕ, ಸೆನ್ಸೇಷನಲ್!  ಈ ಮೂಲಕ ಅವರು ಅಕ್ರಮದ ವಿರುದ್ಧ ಹೋರಾಡುತ್ತಿದ್ದಾರೆ. ಆ ಸ್ಯಾಂಪಲ್ಗಳನ್ನು ನೋಡಿ.
* ತಾಲ್ಲೂಕು ಪಂಚಾಯಿತಿ ಕಚೇರಿಯಿಂದ ಪಡೆದ ಮಾಹಿತಿ ಅನ್ವಯ 12ನೇ ಹಣಕಾಸು ಆಯೋಗದ ಅನುದಾನದ ಹಂಚಿಕೆಯನ್ನು ಪತ್ರಿಕೆಯಲ್ಲಿ ಮಂಜುನಾಥ್ ಪ್ರಕಟಿಸಿದರು. ಅದರ ಪ್ರಕಾರ 25 ಕಾಮಗಾರಿಗಳಿಗೆ 19 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಕ್ರಿಯಾಯೋಜನೆಯ ಪೂತರ್ಿ ವಿವರ ಪ್ರಕಟವಾಯಿತು.
-ಮರುದಿನ ತಾಪಂ ಕಚೇರಿಗೆ ಜನರೇ ಮುಗಿಬಿದ್ದರು, ನಮ್ಮೂರಿನಲ್ಲಿ ಅಂಗನವಾಡಿ ಕಟ್ಟಡವೇ ಇಲ್ಲ. ಅದರ ದುರಸ್ತಿಗೆ 78 ಸಾವಿರ ಕೊಟ್ಟಿದ್ದೀರಿ. ಈ ಹಣ ಏನು ಮಾಡುತ್ತೀರಿ ಎಂಬ ಪ್ರಶ್ನೆ. ಮತ್ತೊಬ್ಬರು- ನಮ್ಮೂರಿನ ಅಂಗನವಾಡಿಗೆ ಸುಣ್ಣ ಬಳಿಯಲು ಖಚರ್ಾಗಿದ್ದು 3,000 ರೂಪಾಯಿ. ಇಷ್ಟೊಂದು ದೊಡ್ಡ ಮೊತ್ತ ತೋರಿಸಿದ್ದೀರಿ.  ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಸುರಿಮಳೆ.
ಸಿಡಿದೆದ್ದ ಜನರಿಗೆ ಹೆದರಿದ ತಾಲ್ಲೂಕು ಪಂಚಾಯಿತಿ ಅಂಥ ಕಾಮಗಾರಿಗಳನ್ನು ಕೈ ಬಿಟ್ಟರು, 13 ಲಕ್ಷ ರೂಪಾಯಿ ಉಳಿಯಿತು. ನುಂಗಣ್ಣರು ಬೆಪ್ಪಣ್ಣರಾದರು!
* ಸಣ್ಣ ರೈತರಿಗೆ ಸಕರ್ಾರ ನೀಡುವ 1,000 ರೂಪಾಯಿ ಸಹಾಯಧನ ಈ ವರ್ಷ ಯಾರ್ಯಾರಿಗೆ ಸಂದಿದೆ ಎನ್ನುವ ಮಾಹಿತಿಯನ್ನು ಅರಿವು ಪ್ರಕಟಿಸಿತು.
ಆ ಪಟ್ಟಿಯಲ್ಲಿ  ಮಾಜಿ ಶಾಸಕರ ಸಂಬಂಧಿ, ದೊಡ್ಡ ರೈತರ ಹೆಸರೂ ಇತ್ತು, ನಿಧನರಾದ ರೈತರ ಹೆಸರೂ ಇತ್ತು ಅರ್ಹ ರೈತರು ರೊಚ್ಚಿಗೆದ್ದರು.
* ಹಿಂದುಳಿದ ವರ್ಗಗಳ ವಿದ್ಯಾಥರ್ಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡ ವಿದ್ಯಾಥರ್ಿಗಳ ಪಟ್ಟಿ ಒಮ್ಮೆ ಪ್ರಕಟವಾಯಿತು.
ಅಚ್ಚರಿಯ ಸುರಿಮಳೆ. ಎಷ್ಟೊ ಮಂದಿ ವಿದ್ಯಾಥರ್ಿಗಳೇ ಅಲ್ಲ. ಫೋರ್ಜರಿ ಸಹಿಗೆಲ್ಲ ವಿದ್ಯಾಥರ್ಿ ವೇತನ. ಈ ಹಗರಣದ ವಿರುದ್ಧ ಈಗಲೂ ವಿದ್ಯಾರ್ಥಿಗಳೂ ಹೋರಾಟ ಮಾಡುತ್ತಿದ್ದಾರೆ.
* ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಬೇಕಾದರೆ ನಿಜವಾದ ಶುಲ್ಕ 1,926 ರೂಪಾಯಿ. ಆದರೆ ಚಿಂತಾಮಣಿಯ ಹಲವು ಗ್ಯಾಸ್ ಏಜೆನ್ಸಿಗಳಲ್ಲಿ 5,000ಕ್ಕೂ ಹೆಚ್ಚು ಹಣ ಪಡೆಯುತ್ತಿದ್ದರು, ಈ ಬಗ್ಗೆ ಹೋರಾಡಿದರು ಮಂಜುನಾಥ್. ದುಬಾರಿ ಹಣ ಕೊಟ್ಟು ಕೈ ಸುಟ್ಟುಕೊಂಡ ಜನರ ದಂಡೇ ಏಜೆನ್ಸಿ ಮುಂದೆ ಜಮಾಯಿಸಿತು, ಈಗ ಎಲ್ಲವೂ ಸರಿ ಹೋಗಿದೆ.
* ಪ್ರಕೃತಿ ವಿಕೋಪ ನಿಯಡಿ ಶೆಟ್ಟಿಹಳ್ಳಿಯಲ್ಲಿ ಜುಟ್ಟುವಿನ ಕೆರೆ ಏರಿ ದುರಸ್ತಿಗೆ 2 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಬಿತ್ತರವಾಯಿತು,
-ಮುಂದಿನ ಸಂಚಿಕೆಯಲ್ಲಿ ಆ ಊರಿನ ಓದುಗರು ಪತ್ರ ಬರೆದರು- ನಮ್ಮೂರಲ್ಲಿ ಆ ಹೆಸರಿನ ಕೆರೆಯೇ ಇಲ್ಲವಲ್ಲ ಎಂದು!
ಇವೆಲ್ಲ ಸ್ಯಾಂಪಲ್ಗಳಷ್ಟೇ.
ಮಂಜುನಾಥ್ ಬರೇ ಪತ್ರಿಕೆಯಲ್ಲಿ ಮಾಹಿತಿ ಹಾಕಿ ಸುಮ್ಮನೆ ಕೂರೋದಿಲ್ಲ. ಅನ್ಯಾಯದ ವಿರುದ್ಧ ಹೋರಾಡಲು ಜನರಿಗೆ ಮಾರ್ಗದರ್ಶನವನ್ನೂ ನೀಡುತ್ತಾರೆ. ಇದಕ್ಕಾಗಿ `ಮಾಹಿತಿ ಕೇಂದ್ರ'ವನ್ನೂ ಆರಂಭಿಸಿದ್ದಾರೆ.
ಈ ಪತ್ರಿಕೆಯ ಪ್ರಕಾಶಕರಾದ ಶ್ರೀನಿವಾಸಪುರದ ಪಿ.ಎಸ್.ರೆಡ್ಡಿ ಇಂಥ ಪತ್ರಿಕೆಯನ್ನು ಕೋಲಾರ ಜಿಲ್ಲಾ ಮಟ್ಟದಲ್ಲಿ  ತರಲು ಉದ್ದೇಶಿಸಿದ್ದಾರೆ.
`ಜನರಿಗೆ ತಿಳುವಳಿಕೆ ಬಂದು ಅವರೇ ಹೋರಾಡುವಂತಾಗಬೇಕು. ಹಾಗಾದಾಗ ಮಾತ್ರ ಭ್ರಷ್ಟಾಚಾರ ತೊಡೆಯಲು ಸಾಧ್ಯ' ಎನ್ನುತ್ತಾರೆ ಮಂಜುನಾಥ್. ಈಗ ಚಿಂತಾಮಣಿಯಲ್ಲಿ ಕೊಂಚ ಮಟ್ಟಿಗೆ ಪಾರದರ್ಶಕತೆ ಬಂದಿದೆ.



1 comment:

  1. blog chennagide. jatege Arivu patrike prayoga chennagide. good luck to Manjunath.
    Sudarshan Channangihalli

    ReplyDelete