Friday, October 1, 2010

ಭೂ ಹಗರಣದ ಸುದ್ದಿ ಓದಿ ದಣಿದವರಿಗೆ ಈ ಜೋಕ್‌..
`ನಾನು ಮುಖ್ಯಮಂತ್ರಿಯಾಗಲಾ?
ಬ್ರಹ್ಮ ಸೃಷ್ಟಿ ಕಾರ್ಯ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಒಂದಷ್ಟು ಜನರ ಗುಂಪೊಂದು ಆತನ ಬಳಿ ಬಂತು.
`ಅರೆ ಏನಾಯಿತು ನಿಮಗೆಲ್ಲ. ನಿಮ್ಮನ್ನು ಅವತ್ತೇ ಮ್ಯಾನುಫ್ಯಾಕ್ಚರ್‌ ಮಾಡಿ ಕಳಿಸಿದೆನಲ್ಲ?'
ಆ ಗುಂಪು ಹೇಳಿತು- `ಕ್ವಾಲಿಟಿ ಚೆಕ್‌ನಲ್ಲಿ ರಿಜೆಕ್ಟ್‌ ಆಗಿ ಬಂದಿದ್ದೇವೆ ಸರ್‌. ಏನು ಮಾಡೋದು?'
ಬ್ರಹ್ಮನಿಗೆ  ಫುಲ್‌ ತಲೆಬಿಸಿ. ಮತ್ತೊಮ್ಮೆ ಎಲ್ಲರನ್ನೂ ಪರೀಕ್ಷಿಸಿದ.
`ಓಹೋ, ನಿಮಗೆ ಐರನ್‌ ಕಂಟೆಂಟ್‌ ಕೊರತೆ ಇದೆ. ಹೋಗಿ ನೀವು ಕಬ್ಬಿಣ ತಿಂದು ಬದುಕಿ' ಎಂದು ಕಳುಹಿಸಿಕೊಟ್ಟ. ಅವರು ಬಳ್ಳಾರಿ ಮಂತ್ರಿಗಳಾದರು.
'ಇದೊ ನಿಮಗೆ ಸೈಟ್‌ ಸಮಸ್ಯೆ ಇದ್ದ ಹಾಗಿದೆ. ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ಮಾಡಿಕೊಂಡು ಬದಕ್ಕಳಿ' ಎಂದ. ಅವರೆಲ್ಲ  ಸೈಟ್‌ ವ್ಯಾಪಾರ ಮಾಡಿಕೊಂಡು ಬೆಂಗಳೂರಿನ ಮಂತ್ರಿಗಳಾದರು.
'ಅಯ್ಯಯ್ಯೋ, ನಿಮ್‌ ಮೇಲೆ ನಿಮಗೆ ಕಂಟ್ರೋಲ್‌ ಇರಲ್ಲವಲ್ಲ.. ನಿಮಗೇನು ಮಾಡ್ಲಿ...?' ಎಂದು ಬ್ರಹ್ಮ ಚಿಂತೆ ಮಾಡುವಷ್ಟರಲ್ಲೇ ಆ ವ್ಯಕ್ತಿ ಅಂದ- `ನಾನು ಮುಖ್ಯಮಂತ್ರಿಯಾಗಲಾ?' ಅಂತ.

2 comments: