Saturday, July 19, 2014

ಬಕಾಸುರ ಬೆಂಗಳೂರು
ದಿನವಿಡೀ ಚಕ್ರ ಕಟ್ಟಿಕೊಂಡು ಓಡಾಡಿದ್ದ ಬೆಂಗಳೂರು ಶಿವಾ ಎಂದು ರಾತ್ರಿ ಬೆಳಕಿನಡಿಯೇ ಮಲಗಿಬಿಟ್ಟಿದೆ. ಎಣಿಸೋಣವೆಂದರೆ ತಾರೆಗಳಿಲ್ಲ; ಜೋಗುಳಕ್ಕೆ ಸಂಗೀತವಿಲ್ಲ. ಹಾರುತ್ತಿರುವ ವಿಮಾನದ ಲೈಟು ನೋಡಿ, ಫ್ಲೈ ಓವರ್‌ನಲ್ಲಿ ಓಡುತ್ತಿರುವ ವೆಹಿಕಲ್‌ಗಳ ಶಬ್ದಕ್ಕೆ ಕಿವಿ ಆನಿಸಿ ಗಂಟೆ ಲೆಕ್ಕ ಹಾಕುತ್ತಿದೆ ಬೆಂಗಳೂರು. ಬೆಳಕಾಗಿಬಿಡುತ್ತದೆಯಲ್ಲ ಎಂಬ ಚಿಂತೆ.
ಏಕೆಂದರೆ- ಮತ್ತದೇ ನಾಳೆ ಅಲ್ಲವೇ? ಅದೇ ಚಾಕರಿ,
ಹೊಟ್ಟೆ-ಬಟ್ಟೆ ಬಗ್ಗೆ ಯೋಚಿಸುತ್ತಿರುವಾಗಲೇ ಬೆಂಗಳೂರಿಗೆ ಯಾವುದೋ ಹೊತ್ತಲ್ಲಿ ನಿದ್ದೆ ಬಂದುಬಿಡುತ್ತದೆ.
ಇದೇ ಹೊತ್ತಿಗೇ, ನಾಳೆಯನ್ನು ಕಟ್ಟಲು ಬೆಂಗಳೂರು ಜತೆ ಸಾವಿರ ಊರು-ನೂರು ದೇಶ ಸೇರಿಕೊಂಡುಬಿಡುತ್ತದೆ
ಅಕ್ಕಿ ಹೊತ್ತುಕೊಂಡ ಪಂಜಾಬ್ ರಿಜಿಸ್ಟ್ರೇಷನ್‌ನ ಲಾರಿ ಏದುಸಿರುಬಿಟ್ಟುಕೊಂಡು ಬರುತ್ತದೆ; ಮೋರಿ ವಾಸನೆ ತಡೆಯದೆ ಮೂಗಿಗೆ ಬಟ್ಟೆ ಕಟ್ಟಿಕೊಂಡ ಡ್ರೈವರ್ ತಮಿಳು ಹಾಡು ಕೇಳುತ್ತಿರುತ್ತಾನೆ. ದುಬೈ ಅತ್ತರು ಪೂಸಿಕೊಂಡ ಉತ್ತರದಾಕೆ ಕಣ್ಣು ಮಿಟುಕಿಸುತ್ತಾಳೆ; ಫ್ಲೈಟಿನಲ್ಲಿ ಬೆಚ್ಚನೆ ಬಂದಿಳಿದ ಅಮೆರಿಕದ ಆಪಲ್‌ಗೆ ರೊಮಾಂಟಿಕ್ ಕನಸುಗಳಿವೆಯೋ ಗೊತ್ತಿಲ್ಲ. ಗುಜರಾತ್‌ನಿಂದ ಬರುವ ನ್ಯಾನೊ ಕಾರುಗಳಿಗೆ ಈ ರೋಡಿಗಿಳಿಯಬೇಕಲ್ಲ ಎಂಬ ವರಿ. ಇಂಟರ್‌ಸಿಟಿಯಲ್ಲಿ ಬರುವ ಬಿಜಾಪುರ ರೈತನಿಗೆ ದ್ರಾಕ್ಷಿಯೋ, ವೈನೋ ಮಾರಾಟವಾದರೆ ಸಾಕು ಎನ್ನುವ ಕಳವಳ.
ಒಂಟಿಯಲ್ಲ
ಬೆಂಗಳೂರು ಒಂಟಿಯಲ್ಲ. ಎಲ್ಲೆಲ್ಲಿಂದಲೋ ಜನ ಬರುವ ಹಾಗೆಯೇ ಒಂದೊಂದು ಸರಕುಗಳನ್ನೂ ತರುತ್ತಾರೆ. ಎಲ್ಲರಿಗೂ ಬೆಂಗಳೂರು ಬದುಕಿಗೆ ಕಾಂಟ್ರಿಬ್ಯೂಟ್ ಮಾಡುವ ತವಕ. ತಮ್ಮ ಬದುಕನ್ನೂ ಗಟ್ಟಿ ಮಾಡಿಕೊಳ್ಳುವ ‘ರವಸೆ.
ಉಹುಂ, ಹಾಗಂತ ಬೆಂಗಳೂರು ಗಮ್ಮತ್ತು ನಿದ್ದೆ ಮಾಡುವ ಹಾಗೇನೂ ಇಲ್ಲ. ಸತ್ಯಮಂಗಲದಿಂದ ಬರುವ ಮಲ್ಲಿಗೆ ಹೂ ಒಂದಿಷ್ಟು ತಡವಾಗಿಬಿಟ್ಟರೆ ಸಾವಿರ ಮಹಿಳೆಯರ ಹೊಟ್ಟೆಗೆ ಹಿಟ್ಟಿಲ್ಲ; ಲಕ್ಷ ಮಹಿಳೆಯರ ಜುಟ್ಟಿಗೆ ಹೂವಿಲ್ಲ ಎಂದಾಗಿಬಿಡುತ್ತದೆ. ಗುಲ್ಬರ್ಗದಲ್ಲಿ ತೊಗರಿ ಬೆಳೆ ಮಳೆಗೆ ನಾಶವಾದರೆ, ಬೆಂಗಳೂರು ಲಬೋ ಲಬೋ ಎನ್ನುತ್ತದೆ.
ಹಾಲಿನ ಲಾರಿಯ ಹೆಡ್‌ಲೈಟ್ ಬೆಂಗಳೂರಿನ ನಿದ್ದೆಯನ್ನು ಓಡಿಸಿಬಿಡುತ್ತದೆ. ದಿನಕ್ಕೆ 14 ಲಕ್ಷ ಲೀಟರ್ ಹಾಲು 3 ಲಕ್ಷ ಲೀಟರ್ ಮೊಸರು ಬೇಕೇ ಬೇಕು- ಈ ಬೆಂಗಳೂರಿಗೆ. ಊರಿನ ಗೋವಳರೆಲ್ಲ ಎಷ್ಟು ಹಾಲು ಕರೆದರೂ ಬೆಂಗಳೂರು ಹೊಟ್ಟೆ ತುಂಬಿಸುವುದು ಕಷ್ಟವೇ. ದೂರದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರುಗಳೆಲ್ಲ ಜತೆ ಸೇರಿಬಿಡುತ್ತವೆ- ಬೆಂಗಳೂರಿಗೆ ಹಾಲು ಕೊಡಲು.
ಬೆಂಗಳೂರು ಎದ್ದು ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಹೂವಿನ ಗಮಗಮ ಶುರುವಾಗಿಬಿಡುತ್ತದೆ. ಹಬ್ಬದ ಟೈಮೆಂದರೆ ಮುಗಿಯಿತು ಬಣ್ಣದ ಗುಡ್ಡೆ ಹರಿದುಬರುತ್ತದೆ. ಹಬ್ಬದ ಸೀಸನ್‌ನಲ್ಲಿ ದಿನಕ್ಕೆ 50ರಿಂದ 70 ಸಾವಿರ ಕೆಜಿ ಹೂವು ಬೇಕೇಬೇಕು. ರೋಸ್ ಕಂಡರೆ ಎವರ್‌ಯೂತ್ ಬೆಂಗಳೂರು ಎದೆಗೂಡಲ್ಲಿ ಅದೇನೋ ತನನಂ ತನನಂ. ದಿನಕ್ಕೆ 5000 ಕೆಜಿ ರೋಸ್ ಬಿಕರಿಯಾಗಿಬಿಡುತ್ತದೆ. ಕಡಪದಿಂದ ಬರುವ ಸೇವಂತಿ, ಗೌರಿಬಿದನೂರಿನ ಕನಕಾಂಬರ, ಮದುರೈ, ಸೇಲಂನ ಮಲ್ಲಿಗೆ, ಮದ್ದೂರು, ಮೈಸೂರಿನ ಕಾಕಡಗಳು ಹೊಸ ಗಂ‘ ನೀಡುತ್ತದೆ. ಬೋರಿಂಗ್ ಲೈಫ್ ನೋಡಿ ಸುಮ ನಕ್ಕುಬಿಡುತ್ತದೆ; ಹೂವನ್ನೇ ನಂಬಿಕೊಂಡ ಗ್ರಾಮಾಂತರದ ಸಾವಿರಾರು ರೈತರು ಮುಖದಲ್ಲಿ ಹೂವು ಅರಳುತ್ತದೆ; ಮಾರಾಟವನ್ನೇ ನಂಬಿಕೊಂಡ ಶ್ರಮಿಕ ಮಹಿಳೆಯರ ಬದುಕೂ ಅರಳುತ್ತದೆ.

ವೆಜ್ಜೋ-ನಾನ್‌ವೆಜ್ಜೋ?
ಬೆಂಗಳೂರು ಬಕನ ಹಾಗೆ. ಎಷ್ಟು ಕೊಟ್ಟರೂ ತಿನ್ನಬಲ್ಲುದು. ದಿನಕ್ಕೆ 600 ಟನ್ ಅಕ್ಕಿ ಬೇಕು. 1,500 ನ್ ತರಕಾರಿ ಬೇಕು. ಸುಮಾರು 100 ಟನ್ ಮಾಂಸ ಬೇಕು.
ತರಕಾರಿ ತಿನ್ನುವುದರಲ್ಲಿ ಬೆಂಗಳೂರು ಸದಾ ಮುಂದು. ಹಾಪ್‌ಕಾಮ್ಸ್ ಒಂದರ ಮೂಲಕವೇ ಪ್ರತಿ ದಿನ 100 ಮೆಟ್ರಿಕ್ ಟನ್ ತರಕಾರಿ ಇಲ್ಲಿಗೆ ಬರುತ್ತಿದೆ. ಅಂದರೆ ಇದು ಒಟ್ಟು ಮಾರುಕಟ್ಟೆಯ ಶೇ 8ರಷ್ಟು ಮಾತ್ರ.
30,000 ಹಾಕರ್‌ಗಳು ಇಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ. ಇವರಲ್ಲಿ ಶೇ 70ಕ್ಕೂ ಹೆಚ್ಚು ‘ಾಗ ತರಕಾರಿಯನ್ನೇ ಮಾರಿ ಬದುಕು ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ತರಕಾರಿ ಕೊಳ್ಳುವವರು ಶೇ 83ರಷ್ಟು ‘ಾಗ ಹಾಕರ್‌ಗಳನ್ನು ಮತ್ತು ಮನೆ ಪಕ್ಕದ ಮಾರುಕಟ್ಟೆಯನ್ನೇ ಆಶ್ರಯಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಅಲಯನ್ಸ್ ಸ್ಟ್ರೀಟ್ ವೆಂಡರ್ಸ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳುತ್ತದೆ.
ಬೆಂಗಳೂರು ಬರೇ ವೆಜ್ ಅಲ್ಲ. ಇಡಿ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಮಾಂಸದ ಪೈಕಿ ಶೇ 30ರಷ್ಟನ್ನು ಬೆಂಗಳೂರೇ ಕಬಳಿಸುತ್ತಿದೆ.
ಒಂದು ವರ್ಷದ ಹಿಂದಿನ ಅಂಕಿ ಅಂಶ ನೋಡುವುದಾದರೆ ಬೆಂಗಳೂರು ಪ್ರತಿವರ್ಷ 33,312 ಟನ್ ಮಾಂಸ ಹಾಗೂ 5,825 ಟನ್ ಕೋಳಿ ಮಾಂಸ ತಿನ್ನುತ್ತಿದೆ. 2009ರ ಲೆಕ್ಕದ ಪ್ರಕಾರ 13,800 ಟನ್ ಮಟನ್, 925 ಟನ್ ಬೀಫ್ ಬೆಂಗಳೂರು ತಿಂದಿದೆ.
ಬನಾನ ಸಿಟಿ
ಬೆಂಗಳೂರನ್ನು ನೀವು ಗಾರ್ಡನ್ ಸಿಟಿ ಅಂತ ಹೇಗೆ ಕರೀತೀರೋ, ಹಾಗೆಯೇ ಬನಾನ ಸಿಟಿ ಅಂತಾನೂ ಕರೀಬಹುದು. ಏಕೆಂದರೆ ಬೆಂಗಳೂರು ಒಂದು ದಿನದಲ್ಲಿ ತಿಂದು ಬಿಸಾಡೋ ಬಾಳೆಹಣ್ಣಿನ ಸಿಪ್ಪೆಯನ್ನೇ ರಾಶಿ ಹಾಕಿದರೆ ಯಶವಂತಪುರ ಮಾರುಕಟ್ಟೆ 10 ದಿನ ವಿಸರ್ಜಿಸುವ ಕಸದ ತೂಕಕ್ಕೆ ಸಮವಾಗುತ್ತದೆ!
ಅಂದರೆ ದಿನಕ್ಕೆ 500 ಟನ್ ಬಾಳೆಹಣ್ಣು ಸಿಪ್ಪೆಯನ್ನು ಬೆಂಗಳೂರು ಎಸೆಯುತ್ತಿದೆ. ದಟ್ ಮೀನ್ಸ್, ಬೆಂಗಳೂರು ದಿನಕ್ಕೆ ಬರೊಬ್ಬರಿ 4,000 ಟನ್ ಬಾಳೆ ಹಣ್ಣು ತಿನ್ನುತ್ತಿದೆ. ಈಗ ಹೇಳಿ, ಇದು ಬೆಂಗಳೂರು ಬನಾನ ಸಿಟಿ ಅಲ್ಲವೇ? ಕನಕಪುರ, ರಾಮನಗರ, ಮೈಸೂರು, ತುಮಕೂರಿನಿಂದ ಬರುವ ಏಲಕ್ಕಿ ಬಾಳೆ, ತಮಿಳುನಾಡಿನಿಂದ ಬರುವ ಪಚ್ಚೆ ಬಾಳೆ, ತಿರುಚಿರಾಪಳ್ಳಿಯಿಂದ ಬರುವ ಪುವತ್ ಬಾಳೆ ಬೆಂಗಳೂರಿನ ಫೇವರಿಟ್.
ಸಿಂಗೇನ ಅಗ್ರಹಾರ ಹೋಲ್‌ಸೇಲ್ ಮಾರ್ಕೆಟ್‌ಗೆ ದಿನಾ ದೆಹಲಿ- ಕಾಶ್ಮೀರದಿಂದ  ಸುಮಾರು 500 ಟನ್ ಸೇಬು ಹಣ್ಣುಬರುತ್ತದೆ.
ಹಣ್ಣು ಮಾರುಕಟ್ಟೆಯಲ್ಲಿ ಬೆಂಗಳೂರೇ ನಂಬರ್ ಒನ್. ತೋಟಗಾರಿಕಾ ಇಲಾಖೆ ಲೆಕ್ಕದ ಪ್ರಕಾರ ದಿನಕ್ಕೆ 50ರಿಂದ 60 ಕೋಟಿ ರೂ ಹಣ್ಣಿನ ವಹಿವಾಟು ಇಲ್ಲಿ ನಡೆಯುತ್ತದೆ!
ಹಾಗೆಯೇ, ಗುಲ್ಬರ್ಗದಿಂದ ತೊಗರಿ ಬೇಳೆ, ಕೊಡಗಿನಿಂದ ಕಾಫಿ, ಮಂಗಳೂರಿನಿಂದ ತೆಂಗಿನ ಎಣ್ಣೆ, ಗೋಡಂಬಿ, ತುಮಕೂರು-ಶಿರಾ, ತಿಪಟೂರಿನಿಂದ ಎಳೆನೀರು, ಮಂಡ್ಯ, ಮದ್ದೂರಿನಿಂದ ಕಬ್ಬು, ಗುಜರಾತ್, ರಾಜಸ್ಥಾನಗಳಿಂದ ದಿನಸಿ, ಕೋಲಾರದಿಂದ ಟೊಮೆಟೋ, ಗ್ರಾಮಾಂತರದಿಂದ ಕೊತ್ತಂಬರಿ ಸೊಪ್ಪು.. ಹೀಗೆ ಒಂದೊಂದು ಜಿಲ್ಲೆಯೂ ಬೆಂಗಳೂರಿನ ಹೊಟ್ಟೆ ತುಂಬಿಸುತ್ತದೆ.
ಬೆಂಗಳೂರೆಂದರೆ ಹಾಗೆಯೇ.. ಊರಿಗೆಲ್ಲ ನೆರಳು ಕೊಡುತ್ತದೆ; ತಾನೂ ಬದುಕುತ್ತದೆ. ಇನ್ನೊಬ್ಬರಿಗೂ ಬದುಕು ಕೊಡುತ್ತದೆ. ಕಾಲಿಗೆ ಚಕ್ರ ಕಟ್ಟಿಕೊಂಡು ದಿನವಿಡೀ ಓಡಾಡುವ ಬೆಂಗಳೂರು ಎಲ್ಲರಿಗೂ ಹೊಟ್ಟೆಗೆ ಸಿಕ್ಕಿತ್ತಾ ಎಂದು ನೋಡುತ್ತದೆ. ಸಂಜೆಯ ಹೊತ್ತಿಗೆ 2,500 ಟನ್ ತ್ಯಾಜ್ಯ ವಿಸರ್ಜಿಸಿ ಮತ್ತೆ ನಿದ್ದೆಗೆ ಒರಗುತ್ತದೆ.. ನಾಳೆ ಹೇಗೆ ಎಂಬ ಚಿಂತೆಯೊಂದಿಗೆ.
ನಸುಕಿನಲ್ಲಿ ಸಾಮಗ್ರಿಗಳನ್ನು ಖಾಲಿ ಮಾಡಿಕೊಂಡು ಜಡಜಡ ಶಬ್ದ ಮಾಡಿಕೊಂಡು ಹೊರ ಹೋಗುವ ಲಾರಿಗೆ ಎದುರಿನಲ್ಲಿ ವಾಬ್ಲರ್ ಹಕ್ಕಿಯೊಂದು ಸಿಗುತ್ತದೆ. ದೂರದ ಯುರೇಷಿಯಾದಿಂದ ಅದು ಬೆಂಗಳೂರಿಗೆ ಬರುತ್ತಿದೆ!
ಬೆಂಗಳೂರೆಂದರೆ ಹಾಗೆಯೇ ಎಲ್ಲರಿಗೂ ನೆರಳು ಕೊಡುತ್ತದೆ.




ಎಲ್ಲ ಹಣ್ಣುಗಳಿಗೂ ಬೆಂಗಳೂರು ಮ್ಯಾಲ್ ಕಣ್ಣು!
ಹಣ್ಣಿನ ಮಾರಾಟಕ್ಕೆ ಇಡೀ ದೇಶದಲ್ಲೇ ಬೆಂಗಳೂರು ಬೆಸ್ಟ್ ಪ್ಲೇಸ್ ಎನ್ನುತ್ತದೆ ಫಲೋದ್ಯಮ. ಇಂದು ಹೊರರಾಜ್ಯಗಳಿಂದ ಮಾತ್ರವಲ್ಲ, ಹೊರದೇಶಗಳಿಂದಲೂ ಹಣ್ಣು ಹಂಪಲು ಆಮದಾಗುತ್ತಿದೆ. ಬನ್ನಿ, ಬೆಂಗಳೂರು ಫ್ರುಟ್ ಮಾರ್ಟ್‌ಗೆ ಒಂದು ಸುತ್ತು ಬರೋಣ...
*ಬೆಂಗಳೂರಿನಲ್ಲಿ  ವಾಷಿಂಗ್ಟನ್ ಆಪಲ್ ಮಾರಾಟ ಹೆಚ್ಚುತ್ತಿದೆ.  ಇನ್ನು  ಆಸ್ಟ್ರೇಲಿಯಾ, ಜಪಾನ್, ಚೀನಾದಿಂದಲೂ ಸೇಬು ಬರುತ್ತಿದೆ. ಅಮೆರಿಕ, ಯುಕೆಯಿಂದ ಮರಸೇಬು, ಫ್ಲೋರಿಡಾ, ಕ್ಯಾಲಿಫೋರ್ನಿಯಾದಿಂದ ಕಿತ್ತಳೆ ಬರುತ್ತಿದೆ. ಫ್ರೆಷ್ ಕ್ಯಾಲಿಫೋರ್ನಿಯಾ ಗ್ರೇಪ್ಸ್, ಕ್ಯಾಲಿಫೋರ್ನಿಯಾ ಪ್ರುನ್ಸ್, ಕ್ಯಾಲಿಫೋರ್ನಿಯಾ ಪ್ರೀಚಸ್, ನೆಕ್ಟೇರಿಯನ್ಸ್, ಪ್ಲಮ್‌ಗಳ ಮಾರಾಟ ಈಗ ಬೆಂಗಳೂರಿನಲ್ಲಿ ತೀವ್ರಗತಿಯಿಂದ ಸಾಗುತ್ತಿದೆ ಎಂದು ವಿದೇಶಿ ಹಣ್ಣುಗಳ ಮಾರಾಟ ಪ್ರವರ್ತಕ ಕಂಪೆನಿ ಎಸ್‌ಸಿಎಸ್ ಸಮೂಹ ಸಂಸ್ಥೆಯ ನಿರ್ದೇಶಕ ಸುಮಿತ್ ಶರಣ್ ಹೇಳುತ್ತಾರೆ.
ಮೊದಲು ಬೆಂಗಳೂರಿನಲ್ಲಿ  ‘ಾರತೀಯ ಹಣ್ಣುಗಳು ಮಾತ್ರ ಲ‘್ಯವಿದ್ದವು. ಈಗ ಸಂಘಟಿತ ರಿಟೇಲಿಂಗ್‌ನ ಪರಿಣಾಮ ವಿದೇಶಿ ಹಣ್ಣುಗಳು ಲ‘್ಯವಾಗುತ್ತಿವೆ. ಹೆಚ್ಚುತ್ತಿರುವ ಆದಾಯ, ವಿದೇಶ ಪ್ರವಾಸದ ಫಲ,ನಗರೀಕರಣ, ಬದಲಾಗುತ್ತಿರುವ ಲೈಫ್‌ಸ್ಟೈಲ್‌ನಿಂದಾಗಿ ವರ್ಷವಿಡೀ ವಿದೇಶಿ ಹಣ್ಣುಗಳು ದೊರೆಯುವಂತಾಗಿವೆ ಎಂದು ಅವರು ವಿಶ್ಲೇಷಿಸುತ್ತಾರೆ.
ಪ್ರತಿದಿನ ಬೆಂಗಳೂರಿಗೆ ಎರಡು ಕಂಟೇನರ್ ತುಂಬಾ ವಿದೇಶಿ ಹಣ್ಣು ಬರುತ್ತದೆ. ಇದರ ಬೆಲೆ ಎಷ್ಟಪ್ಪಾ ಎಂದರೆ 80 ಲಕ್ಷ ರೂಪಾಯಿ. ಅಂದರೆ, ನಿತ್ಯ 80 ಲಕ್ಷ  ರೂ. ವಿದೇಶಿ ಹಣ್ಣು ಇಲ್ಲಿ ಖರ್ಚಾಗುತ್ತದೆ ಎಂದಾಯಿತು. ‘ಬೆಂಗಳೂರಿನ ಶ್ರೀಮಂತ ಜನ ವಿದೇಶಿ ಹಣ್ಣಿಗೆ ಮುಗಿಬೀಳುತ್ತಾರೆ. ದುಡ್ಡಿನ ಮುಖ ನೋಡೊಲ್ಲ. ಆಸ್ಟ್ರೇಲಿಯಾ ಚೆರ‌್ರಿ ಬೆಲೆ ಕೆಜಿಗೆ 1800 ರೂ ಇದ್ದರೂ ತಲೆಕೆಡಿಸಿಕೊಳ್ಳೋದಿಲ್ಲ’ ಎಂದು ರಸೆಲ್ ಮಾರ್ಕೆಟ್ ಫ್ರುಟ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಪ್ರ‘ಾನ ಕಾರ‌್ಯದರ್ಶಿ ಇದ್ರೀಸ್ ಚೌ‘ರಿ ಹೇಳುತ್ತಾರೆ.
ಬೆಂಗಳೂರು ಹಣ್ಣು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಎಂದು ತೋಟಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಹೇಳುತ್ತಾರೆ.
* ಸೀಸನ್‌ನಲ್ಲಿ ಪ್ರತಿದಿನ ಬೆಂಗಳೂರಿಗೆ 100 ಟನ್ ಸಪೋಟಾ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗದಿಂದ ಬರುತ್ತದೆ. ಹಿರಿಯೂರು, ಹೊಸದುರ್ಗ, ಚಿತ್ರದುರ್ಗ, ಕೊಪ್ಪಳದಿಂದ ದಾಳಿಂಬೆ ಬರುತ್ತದೆ. ಇದು ದಿನಕ್ಕೆ 50 ಟನ್ ಗ್ಯಾರಂಟಿ.
* ಬೆಂಗಳೂರು ಬ್ಲೂ  ದ್ರಾಕ್ಷಿ ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರದಿಂದ ಬರುತ್ತಿದ್ದು, ದಿನಕ್ಕೆ ಕನಿಷ್ಠ 100 ಟನ್ ಖರ್ಚಾಗುತ್ತಿದೆ.
* ಪಪ್ಪಾಯಕ್ಕೆ ಎಲ್ಲಿಲ್ಲದ ಡಿಮಾಂಡ್. ಸೀಸನ್‌ನಲ್ಲಿ ಇದು ದಿನಕ್ಕೆ  ಸಾವಿರ ಟನ್ ಖರ್ಚಾಗುವುದೂ ಉಂಟು. ಅನಂತಪುರ, ಚಿತ್ರದುರ್ಗ ತುಮಕೂರು, ಹಿರಿಯೂರಿನಿಂದ ಬರುತ್ತದೆ.
*ಸೊರಬ, ಬನವಾಸಿ, ಕೊಡಗು, ಉಡುಪಿ, ಮೂಡಬಿದಿರೆಯಿಂದ ಬರುವ ಪೈನಾಪಲ್ ಸೀಸನ್‌ನಲ್ಲಿ 800 ಟನ್ ಖರ್ಚಾಗುವುದೂ ಉಂಟು.
* ಕರ್ನೂಲು, ಕಡಪ, ಗಡ್ವಾಲ್, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಿಂದ ಮೂಸಂಬಿ ಬರುತ್ತದೆ. ದಿನಕ್ಕೆ 800ರಿಂದ 1000 ಟನ್ ಬೇಡಿಕೆ ಇದೆ.
* ನಾಗಪುರ ಮತ್ತು ಕೊಡಗಿನಿಂದ ಬರುವ ಕಿತ್ತಳೆ ದಿನಕ್ಕೆ 1000 ಟನ್ ಖರ್ಚಾಗುತ್ತದೆ.
* ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶಗಳಿಂದ ಬರುವ ಕಿವಿ ಹಣ್ಣು, ಊಟಿ, ಕೊಡೈಕೆನಾಲ್‌ನಿಂದ ಬರುವ ಬೆಣ್ಣೆ ಹಣ್ಣು, ಮಹಾಬಲೇಶ್ವರದ ಸ್ಟ್ರಾಬೆರ‌್ರಿ, ಸೊಲ್ಲಾಪುರದಿಂದ ಬರುವ ಗೋರೆಹಣ್ಣಿಗೆ ಈಗ ಡಿಮಾಂಡ್ ಹೆಚ್ಚುತ್ತಿದೆ



 ತರಕಾರಿ ಹೊಸಕೋಟೆಯಿಂದ
ಬೆಂಗಳೂರು ತಿನ್ನುವ ಬೀನ್ಸ್ ಹೊಸಕೋಟೆಯದ್ದು, ಟೊಮೆಟೋ ಹೊಸಕೋಟೆಯಿಂದ ಬಂದಿದೆ, ಕ್ಯಾರೆಟ್ ಹೊಸಕೋಟೆಯಿಂದಲೇ... ಹೀಗೆ ಯಾವ ಹೆಸರು ಹೇಳಿದರೂ ಹೊಸಕೋಟೆ ಹೆಸರು ಮೊದಲಿಗೆ ಬಂದುಬಿಡುತ್ತದೆ.
ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಬೆಂಗಳೂರು ಜನರಿಗೆ ತರಕಾರಿ ಪೂರೈಸುತ್ತಿದೆ. ಬೆಂಗಳೂರಿಗೆ ಎಲ್ಲೆಲ್ಲಿಂದ ತರಕಾರಿ ಸಪ್ಲೈ ಆಗುತ್ತಿದೆ ಎಂದು ನೋಡೋಣ...
ಬೀನ್ಸ್ ಹೊಸಕೋಟೆ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹಾಸನ, ದಾಬಸ್‌ಪೇಟೆಯಿಂದ ಬಂದರೆ, ಟೊಮೆಟೋ, ಕೋಲಾರ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಮಾಗಡಿಯಿಂದ ಬರುತ್ತದೆ. ಕೊತ್ತಂಬರಿ ಸೊಪ್ಪು ಚಿಂತಾಮಣಿ, ಕೋಲಾರದಿಂದ ಪೂರೈಕೆಯಾದರೆ, ಕ್ಯಾರೆಟ್ ಹೊಸಕೋಟೆ, ಕೋಲಾರ, ಚಿಕ್ಕಬಳ್ಳಾಪುರ, ಊಟಿಯಿಂದ ಬರುತ್ತದೆ.
ಬೆಂಡೆಕಾಯಿ ತಮಿಳುನಾಡಿನಿಂದ ಬಂದರೆ, ನಿಂಬೆಹಣ್ಣು ಆಂ‘್ರದ ಗುಂಟೂರಿನಿಂದ ಹಾಗೂ ನುಗ್ಗೇಕಾಯಿ ತಮಿಳುನಾಡಿನಿಂದ ಬರುತ್ತದೆ. ಬೂದುಕುಂಬಳ ಕಾಯಿ ಚಿಂತಾಮಣಿ, ಕೋಲಾರ ಮುಂಬೈ, ಮಹಾರಾಷ್ಟ್ರದಿಂದ ಬರುತ್ತದೆ.
ಮೈಸೂರಿನಿಂದ ಸೌತೆಕಾಯಿ, ಪಡುವಲಕಾಯಿ, ದಪ್ಪ ಮೆಣಸು ಬಂದರೆ, ಎಳೆ ಮೆಣಸಿನ ಕಾಯಿ ಅರಕಲಗೂಡು, ಮಾಗಡಿಯಿಂದ ಸಪ್ಲೈ ಆಗುತ್ತದೆ. ಒಂದು ದಿನಕ್ಕೆ ಬೆಂಗಳೂರಿಗೆ 1,500 ಟನ್‌ಗೂ ಹೆಚ್ಚು ತರಕಾರಿ ಪೂರೈಕೆಯಾಗುತ್ತದೆ ಎಂಬ ಅಂದಾಜಿದೆ.
ಪ್ರತಿ ದಿನ ಬೆಂಗಳೂರಿಗೆ 500 ಟನ್ ಈರುಳ್ಳಿ ಬರುತ್ತಿದೆ. ಇದು ಬಹುತೇಕ ಚಿತ್ರದುರ್ಗ, ಹೊಸದುರ್ಗ ಹಾಗೂ ಮಹಾರಾಷ್ಟ್ರಗಳಿಂದ ಬರುತ್ತಿದೆ.



ಶೇ 45ರಷ್ಟು ಬೆಳವಣಿಗೆ
ಬೆಂಗಳೂರಿನ ರಿಟೇಲ್ ಬಿಸಿನೆಸ್ ಪ್ರತಿವರ್ಷಕ್ಕೆ ಶೇ 45ರಷ್ಟು ಹೆಚ್ಚುತ್ತಿದೆ. ದೇಶಕ್ಕೆ ಯಾವುದೇ ಹೊಸ ಉತ್ಪನ್ನ ಬಂದರೆ ಮೊದಲಿಗೆ ಬಿಡುಗಡೆಯಾಗುವ ನಗರ ಬೆಂಗಳೂರು ಎಂಬ ಹೆಗ್ಗಳಿಕೆ ಪ್ರಾಪ್ತವಾಗಿದೆ. ವಿವಿ‘ ರಿಟೇಲ್ ಶಾಪ್‌ಗಳಲ್ಲಿ ಪ್ರತಿದಿನ 30,000 ಬಿಲ್‌ಗಳು ಇಶ್ಯೂ ಆಗುತ್ತಿದೆ!


ದಿನಕ್ಕೆ 200 ಹೆಕ್ಟೇರ್ ಬೆಳೆ ಬೆಂಗಳೂರಿಗೆ
ರಾಜ್ಯದ ಇತರೆ ಜಿಲ್ಲೆಗಳಿಂದಲೇ ಸಾಕಷ್ಟು ಅಕ್ಕಿ ಪೂರೈಕೆಯಾದರೂ ಆಂ‘್ರ, ಪಂಜಾಬ್‌ಗಳಿಂದಲೂ ಅಕ್ಕಿ ಬರುತ್ತದೆ. ಒಂದು ದಿನಕ್ಕೆ 600 ಟನ್ ಅಕ್ಕಿ ಬೇಕೆಂದರೆ, ಅಂದಾಜು ದಿನಕ್ಕೆ 200 ಹೆಕ್ಟೇರ್ ನೆಲದಲ್ಲಿ ಬೆಳೆದ ‘ತ್ತ ಬೆಂಗಳೂರಿಗೇ ಬೇಕು. ಅಂದರೆ ವರ್ಷಕ್ಕೆ 73,000 ಹೆಕ್ಟೇರ್‌ನ ಬೆಳೆಯನ್ನೆಲ್ಲ ಬೆಂಗಳೂರು ತಿನ್ನುತ್ತಿದೆ ಎಂದಾಯಿತು. ಅಷ್ಟು ಜನ ರೈತರಿಗೂ ಕೆಲಸ ಸಿಕ್ಕಿತು; ಮ‘್ಯವರ್ತಿಗಳಿಗೂ ಉದ್ಯೋಗ ಬಂತು. ಈ ಕಾಸ್ಮೊಪಾಲಿಟನ್ ಸಿಟಿಯಲ್ಲಿ 60 ಬಗೆಯ ಅಕ್ಕಿ ಮಾರಾಟವಾಗುತ್ತಿದೆ!

ಬಾಕ್ಸ್..
ಮೂರು ಟನ್ ಖರ್ಜೂರ
ಹೆಲ್ತ್ ಕಾನ್ಷಿಯಸ್ ಬೆಂಗಳೂರಿಗೆ ಜಾಸ್ತಿ. ಹೀಗಾಗಿಯೇ ಡ್ರೈ ಫ್ರೂಟ್‌ಗಳ ಮಾರಾಟವೂ ‘ರದಲ್ಲಿ ಸಾಗುತ್ತದೆ. ಅದರಲ್ಲೂ ಖರ್ಜೂರ ಮಾರಾಟ ಎಷ್ಟಾಗುತ್ತದೆ ಎಂಬ ಅನುಮಾನವಿದ್ದರೆ ಕೇಳಿ- ತಿಂಗಳಿಗೆ ಬರೋಬ್ಬರಿ ಮೂರು ಟನ್ ಖರ್ಜೂರ ಬಿಕರಿಯಾಗುತ್ತದೆ. ಮದೀನಾ, ಜೋರ್ಡಾನ್ ಕಣಿವೆ, ಇರಾಕ್‌ನಿಂದ ಡೇಟ್ಸ್ ಬರುತ್ತದೆ.

ದೇಶದ ನಾಲ್ಕನೇ ದೊಡ್ಡ ನಗರ
ದೇಶದ ನಿವ್ವಳ ಆಂತರಿಕ ಉತ್ಪನ್ನ (ಜಿಡಿಪಿ) ಲೆಕ್ಕಾಚಾರ ನೋಡುವುದಾದರೆ ಬೆಂಗಳೂರು ದೇಶದ ನಾಲ್ಕನೇ ಅತಿ ದೊಡ್ಡ  ನಗರವಾಗಿದೆ. ಬೆಂಗಳೂರು ನಗರ ದೇಶದ ಜಿಡಿಪಿಗೆ 83 ಶತಕೋಟಿ ಡಾಲರ್‌ನಷ್ಟು ಕೊಡುಗೆ ನೀಡುತ್ತಿದೆ. ಮೊದಲ ಸ್ಥಾನದಲ್ಲಿ ಮುಂಬೈ (209 ಶತಕೋಟಿ ಡಾಲರ್) ಇದ್ದರೆ ನಂತರದ ಸ್ಥಾನಗಳಲ್ಲಿ  ನವದೆಹಲಿ (167 ಶತಕೋಟಿ ಡಾಲರ್), ಕೋಲ್ಕತ್ತ (150 ಶತಕೋಟಿ ಡಾಲರ್) ಇವೆ. ಬೆಂಗಳೂರಿನ ಇತರೆ ಹೆಗ್ಗಳಿಕೆ ಎಂದರೆ ‘ಾರತದಲ್ಲೇ ಅತಿ ಹೆಚ್ಚು ಕೋಟ್ಯಪತಿಗಳ ನಗರ. 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಹೆಚ್ಚು ಕುಟುಂಬಗಳು ಇರುವ ನಗರವೂ ಹೌದು.

ಅದೇ ರೆಡ್‌ಲೈಟ್, ಅದೇ ಡಿಸ್ಕೌಂಟ್, ಅದೇ ಮೀಟಿಂಗು, ಅದೇ ಟೆನ್‌ಷನ್, ಅದೇ ಆಕ್ಸಿಡೆಂಟು, ಅದೇ ಕ್ಯೂ.. ಎಲ್ಲವೂ ಅದದೇ. ಗೊತ್ತಿದ್ದರೂ ಅದೇ ಬದುಕಿಗೆ ಮತ್ತೆ ರೆಡಿಯಾಗಬೇಕಲ್ಲ?

No comments:

Post a Comment